ಶ್ರೀಗುರು ಮಂತ್ರಾಲಯ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂಜೀವ್ ಶೆಟ್ಟಿ, ವೆಂಕಟೇಶ್.ಎಸ್ ಹಾಗೂ ಪಿ.ಎನ್.ಶ್ರೀನಾಥ್ ಅವರು ನಿರ್ಮಿಸುತ್ತಿರುವ ‘ಲವ್ oಟಿ ಓಊ೪ ಚಿತ್ರಕ್ಕೆ ಬೆಂಗಳೂರಿನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ತಿಲಕ್, ಮಾಧುರಿ ಹಾಗೂ ಜಯಲಕ್ಷ್ಮೀ ಅವರ ಅಭಿನಯದಲ್ಲಿ ಕೋರ್ಟ್ ಸನ್ನಿವೇಶದ ಚಿತ್ರೀಕರಣ ನಡೆದಿದೆ. ಜಯಲಕ್ಷ್ಮೀ ಅವರು ನ್ಯಾಯಾಧೀಶರಾಗಿ ಕಾಣಿಸಿಕೊಂಡಿದ್ದಾರೆ ಹಾಗೂ ಇದೇ ಹಂತದಲ್ಲಿ ನಡೆದ ಹಾಸ್ಯಭರಿತ ಸಾಹಸ ಸನ್ನಿವೇಶದ ಚಿತ್ರೀಕರಣದಲ್ಲಿ ಹಾಸ್ಯನಟರಾದ ಬಿರಾದಾರ್, ಮೈಸೂರು ಶ್ರೀಕಂಠು, ಮು.ಸುರೇಶ್, ಮುತ್ತುರಾಜ್, ವಠಾರ ಮಲ್ಲೇಶ್ ಹಾಗೂ ಮಂಗಳಮುಖಿಯರು ಅಭಿನಯಿಸಿದ್ದರು.
ಪತ್ರಕರ್ತ ಪಿ.ಎನ್.ಶ್ರೀನಾಥ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಿರಂಜನ್ಬಾಬು ಅವರ ಛಾಯಾಗ್ರಹಣವಿದೆ. ಪಿ.ಎನ್.ಶ್ರೀನಾಥ್ ಅವರೇ ಚಿತ್ರದ ಹಾಡುಗಳನ್ನು ಬರೆದು ಸಂಗೀತ ನೀಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ, ಫ಼ೈವ್ಸ್ಟಾರ್ ಗಣೇಶ್, ಇಮ್ರಾನ್ ನೃತ್ಯ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಅಕುಲ್ ಬಾಲಾಜಿ, ತಿಲಕ್, ಮಾಧುರಿ, ಬುಲೆಟ್ಪ್ರಕಾಶ್, ಮಂಡ್ಯ ರಮೇಶ್, ಬ್ಯಾಂಕ್ ಜನಾರ್ದನ್, ಚಿದಾನಂದ್, ನಯನಕೃಷ್ಣ, ಆರ್ಜೆ ರೋಹಿತ್, ಆರ್ಜೆ ರಶ್ಮಿ, ರಾಜೇಶ್ಕೃಷ್ಣನ್, ರಿಶಿಕುಮಾರ್ ಸ್ವಾಮೀಜಿ, ಜಯಲಕ್ಷ್ಮೀ, ಜ್ಯೋತಿ (ಕೋತಿರಾಜು), ಬಿರಾದಾರ್, ಮೈಸೂರು ಶ್ರೀಕಂಠು, ಮು.ಸುರೇಶ್, ಮುತ್ತುರಾಜ್, ವಠಾರ ಮಲ್ಲೇಶ್ ಮುಂತಾದವರಿದ್ದಾರೆ.